Labour Crad Scholarship: ಕಾರ್ಮಿಕರ ಮಕ್ಕಳಿಗೆ ಉಚಿತ ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸಿ!
ಕರ್ನಾಟಕ ಸರ್ಕಾರವು ಶ್ರಮಿಕರ ಮಕ್ಕಳಿಗೆ “ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ಯೋಜನೆ” (Educational Incentive Grant Scheme) ಎಂಬ ಶ್ರೇಷ್ಠ ಕಾರ್ಯಕ್ರಮವನ್ನು ಆರಂಭಿಸಿದೆ. ಕಾರ್ಮಿಕ ಕುಟುಂಬಗಳಲ್ಲಿ ಬೆಳೆದ ಮಕ್ಕಳು ಹೆಚ್ಚು ಓದಲಿ, ಸಮಾಜದಲ್ಲಿ ತನ್ನದೇ ಆದ ಸ್ಥಾನ ಪಡೆಯಲಿ ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
ಯೋಜನೆಯ ಮುಖ್ಯ ಉದ್ದೇಶ ಏನು?
ಈ ಯೋಜನೆಯ ಉದ್ದೇಶ, ಬಡತನ ಮತ್ತು ಆರ್ಥಿಕ ಸಂಕಷ್ಟದ ಕಾರಣದಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗಬಾರದು ಎಂಬುದು. ಶ್ರಮಿಕ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ವಿದ್ಯಾರ್ಥಿವೇತನ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ.
ಇದನ್ನು ಓದಿ : Ration card correction online: ರೇಷನ್ ಕಾರ್ಡ್ ತಿದ್ದುಪಡಿ ಆನ್ಲೈನ್ ಮೂಲಕ ಮಾಡಿಸಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.
ಯೋಜನೆಯ ಮುಖ್ಯ ಅಂಶಗಳು
ಯಾರು ಅರ್ಹರು?
- ಈ ಯೋಜನೆಯ ಲಾಭ ಪಡೆಯಲು ವಿದ್ಯಾರ್ಥಿಯ ತಂದೆ ಅಥವಾ ತಾಯಿ ಸಂಘಟಿತ ಕಾರ್ಮಿಕರಾಗಿರಬೇಕು.
- ಕಾರ್ಮಿಕನ ಮಾಸಿಕ ವೇತನ ₹35,000 ಕ್ಕಿಂತ ಕಡಿಮೆ ಇರಬೇಕು.
- 2024–25ನೇ ಶೈಕ್ಷಣಿಕ ಸಾಲದಲ್ಲಿ ವಿದ್ಯಾರ್ಥಿಗಳು ಕನಿಷ್ಠ 50% (ಸಾಮಾನ್ಯ ವರ್ಗ) ಅಥವಾ 45% (SC/ST) ಅಂಕ ಗಳಿಸಿರುವವರಾಗಿರಬೇಕು.
- ಪ್ರತಿ ಕುಟುಂಬದಿಂದ ಗರಿಷ್ಠ ಇಬ್ಬರು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಜಿ ಹಾಕಬಹುದು.
ಇದನ್ನು ಓದಿ : SSLC Exam 3 result 2025: SSLC ರಿಸಲ್ಟ್ ಈ ದಿನ ಬಿಡುಗಡೆ.! ರಿಸಲ್ಟ್ ಚೆಕ್ ಮಾಡಲು ನೇರ ಲಿಂಕ್ ಇಲ್ಲಿದೆ
ಯಾವ ತರಗತಿಯ ವಿದ್ಯಾರ್ಥಿಗಳಿಗೆ?
- ಈ ವಿದ್ಯಾರ್ಥಿವೇತನ ಯೋಜನೆ SSLC (10ನೇ ತರಗತಿ) ರಿಂದ ಪಿಜಿ (Post-Graduation) ವರೆಗೆ ನೀಡಲಾಗುತ್ತದೆ.
- ಜೊತೆಗೆ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸ್ಗಳ ವಿದ್ಯಾರ್ಥಿಗಳೂ ಈ ಯೋಜನೆಗೆ ಅರ್ಹರಾಗುತ್ತಾರೆ.
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
ಡಿಸೆಂಬರ್ 31, 2025
ಅರ್ಜಿ ಸಲ್ಲಿಸುವ ವಿಧಾನ:
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅಧಿಕೃತ ವೆಬ್ಸೈಟ್: www.klwbapps.karnataka.gov.in
ಅರ್ಜಿ ಸಲ್ಲಿಸುವ ಮೊದಲು ಈ ದಾಖಲೆಗಳನ್ನು ತಯಾರಿಸಿಕೊಳ್ಳಿ
- ಕಾರ್ಮಿಕರ ನೋಂದಣಿಯ ದಾಖಲಾತಿ
- ವಿದ್ಯಾರ್ಥಿಯ ಶೈಕ್ಷಣಿಕ ಅರ್ಹತೆ ಪ್ರಮಾಣಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ಪಾಸ್ಪೋರ್ಟ್ ಫೋಟೋ
- ಆಧಾರ್ ಕಾರ್ಡ್
ಈ ಯೋಜನೆಯ ಮೂಲಕ ಸರ್ಕಾರ ಕಾರ್ಮಿಕರ ಮಕ್ಕಳ ಭವಿಷ್ಯವನ್ನು ಬೆಳಗಿಸಲು ನಿಖರ ಹೆಜ್ಜೆ ಹಾಕುತ್ತಿದೆ. ಶಿಕ್ಷಣದ ಮೂಲಕ ಜೀವನದ ಗುಣಮಟ್ಟ ಸುಧಾರಿಸಿಕೊಳ್ಳಬಹುದು ಎಂಬ ನಂಬಿಕೆಯಿಂದ ಈ ಯೋಜನೆ ರೂಪಿಸಲಾಗಿದೆ. ಬಡತನವು ಶಿಕ್ಷಣಕ್ಕೆ ಅಡ್ಡಿಯಾಗದಂತೆ ಮಾಡುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಇದನ್ನು ಓದಿ : SBI Personal Loan 2025: SBI ಬ್ಯಾಂಕ್ ಮೂಲಕ ಪಡೆಯಿರಿ 10 ಲಕ್ಷ ರೂಪಾಯಿ ವೈಯಕ್ತಿಕ ಸಾಲ.! ಸಾಲ ಪಡೆಯಲು ಈ ದಾಖಲಾತಿಗಳು ಬೇಕು
ಈ ಪ್ರೋತ್ಸಾಹ ಧನ ಯೋಜನೆ ನಿಮಗೆ ಅಥವಾ ನಿಮ್ಮ ಪರಿಚಯದ ಕಾರ್ಮಿಕರಿಗೆ ಸಹಾಯವಾಗಬಹುದು. ಆದ್ದರಿಂದ ಅರ್ಜಿ ಸಲ್ಲಿಕೆಗೆ ವಿಳಂಬ ಮಾಡದೇ, ಡಿಸೆಂಬರ್ 31ರೊಳಗೆ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ.