Breaking NewsFarmersHoroscopeSchemeAdike RateTech reviewsStock MarketHealth TipsInsuranceLoansJobsScholarshipsNewsWeather

crop insurance | ಬೆಳೆ ವಿಮೆ ನೋಂದಣಿ ಪ್ರಾರಂಭ ಈ ಜಿಲ್ಲೆಗಳಲ್ಲಿ ಕೊನೆಯ ದಿನಾಂಕ ಇದಾಗಿದೆ

crop insurance

crop insurance :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ರೈತರಾಗಿದ್ದರೆ ಕಡ್ಡಾಯವಾಗಿ ಈ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಿ ಏಕೆಂದರೆ ಪ್ರಕೃತಿ ವಿಕೋಪ ಗಳಿಂದ ಅಥವಾ ಅತಿಯಾದ ಮಳೆಯಿಂದ ನಿಮ್ಮ ಬೆಳೆ ನಷ್ಟವಾದರೆ ನಿಮಗೆ ಬೆಳೆ ಪರಿಹಾರವಾಗಿ ಇಂತಿಷ್ಟು ಹಣ ಅಂತ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಲು ಪ್ರಯತ್ನ ಮಾಡಿ. ಈಗಾಗಲೇ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಕೆಲವೊಂದು ಜಿಲ್ಲೆಗಳಲ್ಲಿ ಬೆಳೆ ವಿಮೆಯ ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನೆಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದಿ.

ರೈತರಿಗೆ ಸಿಗಲಿದೆ 8000 ಹಣ…! ಮೋದಿ ಸರ್ಕಾರ ಕಡೆಯಿಂದ ಬಂಪರ್ ಗಿಫ್ಟ್ ಇಲ್ಲಿದೆ ಮಾಹಿತಿ

ಸ್ನೇಹಿತರೆ ಇದೇ ರೀತಿ ಪ್ರತಿದಿನ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಬೇಕು ಅಂದರೆ ಹಾಗೂ ವಿವಿಧ ರೀತಿ ಸರಕಾರಿ ಹುದ್ದೆಗಳ ಬಗ್ಗೆ ಮತ್ತು ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಹಾಗೂ ಪ್ರಚಲಿತ (current affairs) ಘಟನೆಗಳು & ಪ್ರಚಲಿತ ವಿದ್ಯಮಾನಗಳು ಹಾಗೂ ಟ್ರೆಂಡಿಂಗ್ (trending news) ನ್ಯೂಸ್ ಗಳ ಬಗ್ಗೆ ಪ್ರತಿದಿನ (daily news) ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

ವಿದ್ಯಾರ್ಥಿಗಳಿಗೆ ಸೇರಿದೆ 36,000 ಹಣ.. ಪಿಎಂ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

 

ಬೆಳೆ ವಿಮೆ (crop insurance)…?

ಹೌದು ಸ್ನೇಹಿತರೆ, ರೈತರಿಗೆ ಆಗುವಂತ ಪ್ರಕೃತಿ ವಿಕೋಪಗಳಿಂದ ಹಾಗೂ ಅತಿಯಾದ ಮಳೆ ಅಥವಾ ಮಳೆ ಕೊರತೆಯಿಂದ ಹಾಗೂ ಇತರ ಯಾವುದೇ ಸಮಸ್ಯೆಯಿಂದ ಬೆಳೆ ನಷ್ಟ ಉಂಟಾದರೆ ಅಂತ ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಡೆಯಿಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಗೆ ತರಲಾಗಿದೆ ಹಾಗಾಗಿ ಈ ಯೋಜನೆ ಲಾಭವನ್ನು ಪ್ರತಿಯೊಬ್ಬರು ರೈತರು ಪಡೆಯಬೇಕು ಎಂಬ ಬಯಕೆ ನಮ್ಮದು

crop insurance
crop insurance

 

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಬೆಳೆ ವಿಮೆ ಮಾಡಿಸಲು ಕರ್ನಾಟಕ ರಾಜ್ಯದಾದ್ಯಂತ ರೈತರಿಗೆ ಅವಕಾಶ ಮಾಡಿಕೊಡಲಾಗಿದ್ದು ಈಗಾಗಲೇ ಬೆಳೆ ವಿಮೆ ಅರ್ಜಿ ಪ್ರಾರಂಭವಾಗಿದ್ದು ಮತ್ತು ಇನ್ನು ಕೆಲವೇ ದಿನಗಳು ಬಾಕಿ ಇದೆ ಹಾಗಾಗಿ ಬೆಳೆ ವಿಮೆ ಮಾಡಿಸಲು ಕೆಲವೊಂದು ಬೆಳೆಗಳಿಗೆ ಕೊನೆಯ ದಿನಾಂಕ ನಿಗದಿ ಮಾಡಲಾಗಿತ್ತು ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ತಿಳಿಸಿದ್ದೇವೆ

ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ 2000 ಹಣ ಈ ಮಹಿಳೆಯರಿಗೆ ಮೊದಲು ಬಿಡುಗಡೆ ಇಲ್ಲಿದೆ ಮಾಹಿತಿ

 

ಬೆಳ ವಿಮೆ (crop insurance) ಅರ್ಜಿ ಹಾಕಲು ಇರಬೇಕು ಕೊನೆಯ ದಿನಾಂಕ…?

ಸ್ನೇಹಿತರೆ ನೀವು ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಅಂದರೆ ವಿವಿಧ ರೀತಿ ಬೆಳೆ ವಿಮೆಯ ಅರ್ಜಿ ಪ್ರಾರಂಭವಾಗಿದ್ದು ಇವುಗಳ ತಾತ್ಕಾಲಿಕ ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ ಆದಷ್ಟು ಈ ದಿನಾಂಕದೊಳಗೆ ಬೆಳೆ ವಿಮೆ ಹೊಂದಾಣಿ ಮಾಡಿಸಲು ಪ್ರಯತ್ನ ಮಾಡಿ

ಮಳೆ ಆಶ್ರಿತ ಬೆಳೆಗಳಿಗೆ ಹಾಗೂ ನೀರಾವರಿ ಬೆಳೆಗಳಿಗೆ ಕೊನೆಯ ದಿನಾಂಕ ಜುಲೈ 31 ಎಂದು ನಿಗದಿ ಮಾಡಲಾಗಿದೆ ಬೆಳೆಗಳ ವಿವರವನ್ನು ನಾವು ಕೆಳಗಡೆ ಕೊಟ್ಟಿದ್ದೇವೆ

  • ಜೋಳ
  • ತೊಗರಿ
  • ನವಣೆ
  • ಸಜ್ಜೆ
  • ಜೋಳ
  • ಮುಸುಕಿನ ಜೋಳ,
  • ಭತ್ತ,
  • ಹತ್ತಿ
  • ಹೆಸರು (ಜುಲೈ 15) ಮಳೆ ಆಶ್ರಿತ ಬೆಳೆ

 

ಈ ಮೇಲೆ ನೀಡಿದಂತಹ ಎಲ್ಲಾ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕವನ್ನು ಜುಲೈ 31 ನೇ ತಾರೀಖಿನಂದು ನಿಗದಿ ಮಾಡಲಾಗಿದ್ದು ಆದಷ್ಟು ರೈತರು ಈ ದಿನಾಂಕದ ಒಳಗಡೆ ಬೆಳೆ ವಿಮೆ ಮಾಡಿಸಲು ಪ್ರಯತ್ನ ಮಾಡಿ ಮತ್ತು ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ನೀವು ಫಸಲ್ ಭೀಮಾ ಯೋಜನೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ನಿಖರ ಮಾಹಿತಿಯನ್ನು ಪಡೆದುಕೊಳ್ಳಬಹುದು

 

 

ಬೆಳೆ ವಿಮೆ (crop insurance ) ನೋಂದಣಿ ಮಾಡಲು ಬೇಕಾಗುವ ದಾಖಲಾತಿಗಳು…?

  • ಆಧಾರ್ ಕಾರ್ಡ್
  • FID (ಫ್ರೂಟ್ಸ್ ಐಡಿ)
  • ಬ್ಯಾಂಕ್ ಪಾಸ್ ಬುಕ್
  • ರೈತರ ಜಮೀನಿನ ಪತ್ರ (ಪಹಣಿ)
  • ಮೊಬೈಲ್ ನಂಬರ್

 

ಈ ಮೇಲೆ ನೀಡಿದಂತ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನೀವು ನಿಮ್ಮ ಬೆಳೆಗೆ ಸಂಬಂಧಿಸಿದ ಬೆಳೆ ವಿಮೆಯ ನೋಂದಣಿ ಮಾಡಿಕೊಳ್ಳಬಹುದು.

 

ಬೆಳೆ ವಿಮೆಗೆ (crop insurance ) ಹೇಗೆ ನೋಂದಣಿ ಮಾಡಿಕೊಳ್ಳುವುದು…?

ಹೌದು ಸ್ನೇಹಿತರೆ, ನೀವೇನಾದರೂ ರೈತರಾಗಿದ್ದರೆ ಹಾಗೂ ನೀವು ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಅಂದರೆ ನೀವು ಬೆಳೆದಂಥ ಬೆಳೆಗಳ ಮುಂಗಾರು ಬೆಳೆಗಳಿಗೆ ಮಳೆ ಆಶ್ರಿತ ಹಾಗೂ ನೀರಾವರಿ ಆಶ್ರಿತ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಕೂಡ ನೋಂದಣಿ ಮಾಡಿಕೊಳ್ಳಬಹುದು.

ಸ್ನೇಹಿತರೆ ಇಲ್ಲಿ ಗಮನಿಸಬೇಕಾದಂತ ಇನ್ನೊಂದು ಅಂಶವೇನೆಂದರೆ, ನೀವು ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬೇಕಾದರೆ ಕಡ್ಡಾಯವಾಗಿ ನಿಮ್ಮ ಫ್ರೂಟ್ಸ್ ಐಡಿ ನೀಡಬೇಕಾಗುತ್ತದೆ ಹಾಗಾಗಿ ನಿಮ್ಮ ಹತ್ತಿರ ಫ್ರೂಟ್ಸ್ ಐಡಿ ಇದ್ದರೆ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬಹುದು. ಅಥವಾ ಈ ಐಡಿ ನಿಮ್ಮ ಹತ್ತಿರ ಇಲ್ಲವಾದರೆ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆಗಳಿಗೆ ಭೇಟಿ ನೀಡಿ ಈ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬಹುದು ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬಹುದು ಅಥವಾ ನಿಮ್ಮ ಗ್ರಾಮಲೆಕ್ಕಿಗ ಅಧಿಕಾರಿಗಳಿಗೆ ಭೇಟಿ ನೀಡಿ ಈ ಫ್ರೂಟ್ಸ್ ಐಡಿ ಪಡೆದುಕೊಳ್ಳಬಹುದು

 

ಈ ಮಾಹಿತಿ ನಿಮಗೆ ಇಷ್ಟವಾದರೆ ನೀವು ನಿಮ್ಮ ಹತ್ತಿರದ ರೈತರಿಗೆ ಹಾಗೂ ರೈತ ಕುಟುಂಬಗಳಿಗೆ ಈ ಲೇಖನಿಯನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ಜೊತೆಗೆ ಪ್ರತಿದಿನ ಇದೇ ರೀತಿ ಅಪ್ಡೇಟ್ ಪಡೆದುಕೊಳ್ಳಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

 

ರಂಗನಾಥ ದೊರೆ

Founder & Editor-in-Chief Founder and Editor-in-Chief of "PeopleofKarnataka.com", a digital news platform committed to delivering accurate, timely, and trustworthy information to Kannada-speaking readers. With a strong understanding of journalism and digital media, he oversees news content covering Karnataka, India, current affairs, government updates, education, employment, trending topics, and other important developments. With a focus on responsible journalism, factual reporting, and reader-centric content, he is dedicated to making "PeopleofKarnataka.com" a reliable source of news and useful information for its audience.

Join WhatsApp

Join Now

Join Telegram

Join Now

Leave a Comment