Farmer Subsidy Scheme: ರೈತರು ಈಗ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರದ ಸಹಾಯಧನ!
ಕರ್ನಾಟಕ ರಾಜ್ಯದಲ್ಲಿ 2025-26ರ ಮುಂಗಾರು ಋತು ಆರಂಭದಿಂದಲೇ ಸತತ ಮಳೆಯಾಗುತ್ತಿದೆ. ಈ ಹಿಂದೆ ಬಿತ್ತನೆ ಮಾಡಿದ ಬೆಳೆಗಳ ಮೇಲೆ ಮಳೆಯ ದುಷ್ಪರಿಣಾಮಗಳಾಗದಂತೆ ನೋಡಿಕೊಳ್ಳಲು ರಾಜ್ಯ ಕೃಷಿ ಇಲಾಖೆ ಹೊಸ crop advisory ಪ್ರಕಟಿಸಿದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ.
ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ 2025-26
ರೈತರು ಈಗ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರದ ಸಹಾಯಧನ (Subsidy) ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿಯಲ್ಲಿ ಹಲವಾರು ಪ್ರಕಾರದ ಯಂತ್ರೋಪಕರಣಗಳು ದೊರೆಯುತ್ತವೆ.
ಅರ್ಜಿಯ ಸ್ಥಳ
- ನಿಕಟದ ರೈತ ಸಂಪರ್ಕ ಕೇಂದ್ರ (Raitha Samparka Kendra)ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅಗತ್ಯ ದಾಖಲೆ
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಸೈಸ್ ಫೋಟೋ
- ಬ್ಯಾಂಕ್ ಪಾಸ್ಬುಕ್ ನ ಪ್ರತಿಗೆ
- ರೇಶನ್ ಕಾರ್ಡ್
- 20 ರೂ. ಬಾಂಡ್ ಪೇಪರ್
- ಜಮೀನಿನ ಪಹಣಿ/ಊತಾರ್/RTC
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ರೈತರ ಮೊಬೈಲ್ ಸಂಖ್ಯೆ
ಮಳೆಯ ಅತಿಯಾದ ಪ್ರಮಾಣದಿಂದ ಬೆಳೆ ರಕ್ಷಣೆ ಹೇಗೆ?
ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವುದರಿಂದ ಹೊಂಡ ಅಥವಾ ಬಸಿಗಾಲುವೆಗಳ ಮೂಲಕ ಆ ನೀರನ್ನು ಹೊರಹಾಕುವುದು ಅತ್ಯಾವಶ್ಯಕವಾಗಿದೆ.
ಇದನ್ನು ಓದಿ : Karnataka 2nd PUC Exam 3 Result 2025: ದ್ವಿತೀಯ ಪಿಯುಸಿ ಪರೀಕ್ಷೆ-3 ರ ಫಲಿತಾಂಶ ಯಾವಾಗ ಬಿಡುಗಡೆ
ಗೋವಿನ ಜೋಳ, ಹತ್ತಿ ಬೆಳೆಗಳಿಗೆ ವಿಶೇಷ ಸೂಚನೆಗಳು
- ರಸಗೊಬ್ಬರ ಸಿಂಪಡನೆ:
- 19:19:19 ಅಥವಾ 13:0:45 ರಸಗೊಬ್ಬರಗಳನ್ನು 1 ಲೀಟರ್ ನೀರಿಗೆ 3-5 ಗ್ರಾಂ ದರದಲ್ಲಿ ಬೆರೆಸಿ ಸಿಂಪಡಿಸಬೇಕು.
- ಇದು ಬೆಳೆ ಚೈತನ್ಯವನ್ನು ಪುನಶ್ಚೇತನಗೊಳಿಸಲು ಸಹಕಾರಿಯಾಗುತ್ತದೆ.
- ಮೆಕ್ಕಜೋಳದ ಹುಳು ನಿಯಂತ್ರಣ:
- ಫಾಲ್ ಆರ್ಮಿವಾರ್ಮ್ (Fall Armyworm) ನಿಯಂತ್ರಣಕ್ಕಾಗಿ Emamectin Benzoate ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ದರದಲ್ಲಿ ಸಿಂಪಡಿಸಬೇಕು.
- ಹತ್ತಿ, ಶೇಂಗಾ, ಸೋಯಾ ಬೆಳೆಗಳಿಗೆ:
- ಕಾರ್ಬನ್ ಡೈಜಿಮ್: ಪ್ರತಿ ಲೀಟರ್ ನೀರಿಗೆ 3 ಗ್ರಾಂ.
- ಧೈಯೋಪಿನೆಟ್ ಮಿಥೈಲ್: ಪ್ರತಿ ಲೀಟರ್ ನೀರಿಗೆ 2 ಗ್ರಾಂ ಸಿಂಪಡಿಸಬೇಕು.
ಎಲೆ ಹಳದಿ, ಕೆಂಪು ಬಣ್ಣ ತಿರುವು ತಪ್ಪಿಸಲು
ಹಳದಿ ಅಥವಾ ಕೆಂಪು ಬಣ್ಣಕ್ಕೆ ತಿರುಗುವ ಬೆಳೆ ಎಲೆಗಳನ್ನು ನಿಖರವಾಗಿ ನಿರ್ವಹಿಸಲು ಈ ಪೋಷಕಾಂಶಗಳ ಬಳಕೆ ಮಾಡಬಹುದು:
- ನ್ಯಾನೋ ಡಿಎಪಿ (Nano DAP)
- ನ್ಯಾನೋ ಯೂರಿಯಾ (Nano Urea)
- 19:19:19 ಅಥವಾ 13:0:45
ಈ ಪೋಷಕಾಂಶಗಳು ಬೆಳೆ ಆರೋಗ್ಯವನ್ನು ಪುನಃಸ್ಥಾಪಿಸಲು ನೆರವಾಗುತ್ತವೆ.
ಹೆಚ್ಚಿನ ಮಾಹಿತಿಗಾಗಿ
ಯೋಜನೆಗಳ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳಲು, ಕರ್ನಾಟಕ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು:
ಇದನ್ನು ಓದಿ : BPL CARD Canceled: ಒಂದೇ ಮನೆಗೆ ಎರಡು ರೇಷನ್ ಕಾರ್ಡ್ ಇದ್ದರೆ ರದ್ದು!
ಈ ವರ್ಷ ಕೂಡ ಮಳೆಯ ಅತಿಯಾದ ಪ್ರಮಾಣದಿಂದ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಕೃಷಿ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ರೈತರು ಬೆಳೆಗಳನ್ನು ಕಾಪಾಡಿಕೊಳ್ಳಬಹುದು. ಜೊತೆಗೆ, ಸರ್ಕಾರ ನೀಡುವ ಯಂತ್ರೋಪಕರಣ ಸಬ್ಸಿಡಿ ಯೋಜನೆಯಿಂದ ಲಾಭ ಪಡೆಯುವದು ಹೆಚ್ಚಿನ ಉತ್ಪಾದನೆಗೆ ಸಹಾಯಕವಾಗಬಹುದು.